ಕನಸುಗಳು 2013

ಪುತ್ತೂರು ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ಕನಸುಗಳು-2013 ರ ಪ್ರಯುಕ್ತ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಪೇಪರ್ ಕ್ರಾಫ್ಟ್ ವಿಭಾಗದಲ್ಲಿ ಸುಮಾರು 12 ಪ್ರೌಢಶಾಲೆಗಳ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿದ್ದರು. ಇದರಲ್ಲಿ ಅತ್ತ್ಯುತ್ತಮ ರಚನೆಗಳು ಮೂಡಿಬಂದವು. ಅನುಕ್ರಮವಾಗಿ ಎಸ್. ಜಿ. ಯಂ. ಪ್ರೌಢಶಾಲೆ, ಸರ್ವೆ ಮತ್ತು ಸರಕಾರಿ ಪದವಿ ಪೂರ್ವ ಕಾಲೇಜು, ಕೊಂಬೆಟ್ಟು ಪ್ರಥಮ, ನವೋದಯ ಪ್ರೌಢ ಶಾಲೆ ಬೆಟ್ಟಂಪಾಡಿ ದ್ವಿತೀಯ ಮತ್ತು ಪ್ರಗತಿ ಎಜುಕೇಶನ್ ಟ್ರಸ್ಟ್ ಕಾನೀಯೂರು ತೃತೀಯ ಸ್ಥಾನ ಪಡೆದಿರುತ್ತದೆ. ಇದರಲ್ಲಿ ತೀರ್ಪುಗಾರರಾಗಿ ಶ್ರೀ ಹರೀಶ್ ಶಾಸ್ತ್ರೀ ವಿಭಾಗ ಮುಖ್ಯಸ್ಥರು, ಭೌತಶಾಸ್ತ್ರ ವಿಭಾಗ, ಕುಮಾರಿ ಮಂಗಳಾ ವಿ, ಉಪನ್ಯಾಸಕಿ, ಆಂಗ್ಲ ವಿಭಾಗ ಮತ್ತು ಕುಮಾರಿ ಅಕ್ಷತಾ ಕೆ. ಉಪನ್ಯಾಸಕಿ, ವಾಣಿಜ್ಯ ವಿಭಾಗ, ವಿವೇಕಾನಂದ ಪದವಿ ಪೂರ್ವ ಕಾಲೇಜು ಸಹಕರಿಸಿರುತ್ತಾರೆ. ಇದರ ಸಂಯೋಜನೆಯನ್ನು ಶ್ರೀಮತಿ ಉಷಾ ಎನ್ ಒ ಮತ್ತು ಕು. ಮೋನಿಷಾ ಎನ್. ವಾಣಿಜ್ಯ ವಿಭಾಗ ನೆರವೇರಿಸಿದರು.

Highslide for Wordpress Plugin