ಗೆಲುವು ಕಠಿಣ ಪರಿಶ್ರಮದ ಫಲ-ವಿಜಯಾ ಸರಸ್ವತಿ

ಪ್ರತಿಭೆ, ಪ್ರಯತ್ನ ಮತ್ತು ಪ್ರೋತ್ಸಾಹ ಜೊತೆಯಲ್ಲಿ ಸಾಗಿದರೆ ಯಶಸ್ಸು ದೊರಕುತ್ತದೆ. ಸೋಲನ್ನು ಸವಾಲಾಗಿ ಸ್ವೀಕರಿಸುವ ಮನಸ್ಸುಳ್ಳವರು ಹಂತ ಹಂತವಾಗಿ ಗೆಲುವಿನ ಮೆಟ್ಟಿಲೇರುತ್ತಾರೆ. ಗೆಲುವು ಕಠಿಣ ಪರಿಶ್ರಮದ ಫಲವೇ ಹೊರತು ಆಕಸ್ಮಿಕವಲ್ಲ ಎಂದು ವಿವೇಕಾನಂದ ಕಾಲೇಜಿನ ಎಂ.ಕಾಂ. ವಿಭಾಗದ ಸಂಯೋಜಕಿ ಶ್ರೀಮತಿ ವಿಜಯಾ ಸರಸ್ವತಿ ಹೇಳಿದರು.

ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಚಿಗುರುಭಿತ್ತಿ ಪತ್ರಿಕೆ ಮತ್ತು ವಾಣಿಜ್ಯ ಸಂಘದ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದರು.

Smt.vijaya-Saraswati-speaking

ಅವಕಾಶಗಳನ್ನು ನಾವೇ ಸೃಷ್ಟಿಸಿಕೊಳ್ಳಬೇಕು. ಸಮಾಜಮುಖಿ ಚಿಂತನೆಗಳ ಮೂಲಕ ಆತ್ಮೋನ್ನತಿಯನ್ನು ಸಾಧಿಸಬೇಕು. ವೃತ್ತಿಯೊಂದಿಗೆ ಪ್ರವೃತ್ತಿಯನ್ನು ಹೊಂದಿಸಿಕೊಂಡು ಬದುಕನ್ನು ಸುಂದರವಾಗಿಸಬೇಕು ಎಂದು ನುಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಶುಪಾಲರಾದ ಜೀವನದಾಸ್ ಮಾತನಾಡಿ ವಿದ್ಯಾಸಂಸ್ಥೆಯು ಪಾಠಪ್ರವಚನಗಳ ಜೊತೆಗೆ ಬದುಕಿನ ಶಿಕ್ಷಣವನ್ನೂ ಕಲಿಸಿಕೊಡುತ್ತಿದೆ. ಅಂಥ ಶಿಕ್ಷಣವು ಬದುಕಿಗೊಂದುದಾರಿ ಮತ್ತು ದಿಕ್ಕನ್ನು ತೋರಿಸುತ್ತದೆ. ಉತ್ತಮ ಶಿಕ್ಷಣದ ಮೂಲಕ ಪ್ರತಿಯೊಬ್ಬ ವಿದ್ಯಾರ್ಥಿಯೂ ಮಾನವೀಯತೆಯನ್ನು ಮೈಗೂಡಿಸಿಕೊಂಡು ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು.

ಚಿಗುರು ಸಮಿತಿಯ ಸಂಯೋಜಕರಾದ ಸುಭಾಷ್ ಪಟ್ಟಾಜೆ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉಪನ್ಯಾಸಕಿ ಪುಷ್ಪಲತಾ ನಿರೂಪಿಸಿ ಮೋನಿಷಾ ವಂದಿಸಿದರು. ಚಿಗುರು ಭಿತ್ತಿಪತ್ರಿಕೆ ಮತ್ತು ವಾಣಿಜ್ಯ ಸಂಘವು ಆಯೋಜಿಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು.

Highslide for Wordpress Plugin