ಗ್ರಾಮ ವಿಕಾಸ ಸಮಾವೇಶದ ಪೂರ್ವಭಾವಿ ಸಭೆ

ವಿವೇಕಾನಂದ ವಿದ್ಯಾವರ್ಧಕ ಸಂಘದ ಮಹತ್ವಾಕಾಂಕ್ಷೆಯ ಜನಪರ ಸಾಮಾಜಿಕ ಗ್ರಾಮ ವಿಕಾಸ ಯೋಜನೆಯ ಕಾರ್ಯಕಾರಿ ಸದಸ್ಯರ ಪೂರ್ವಭಾವಿ ಸಭೆಯು ವಿವೇಕಾನಂದ ಪದವಿಪೂರ್ವ ಕಾಲೇಜಿನ ಸಭಾಭವನದಲ್ಲಿ ನಡೆಯಿತು. 2018 ರ ಜನವರಿ 12 ರಂದು ಕಾಲೇಜಿನಲ್ಲಿ ಜರಗಲಿರುವ ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ಗ್ರಾಮ ವಿಕಾಸ ಯೋಜನೆಗೆ ಸಂಬಂಧಿಸಿದ ಗ್ರಾಮದ ಜನರ ಬೃಹತ್ ಸಮಾವೇಶ ನಡೆಯಲಿದ್ದು ಇದರ ಪೂರ್ವಭಾವಿಯಾಗಿ ವಿವಿಧ ವಿಚಾರಗಳ ವಿನಿಮಯ ಮತ್ತು ಜನರನ್ನು ಆಹ್ವಾನಿಸುವ ವಿಷಯಗಳನ್ನು ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೃಷ್ಣ ಭಟ್ ಮಾರ್ಗದರ್ಶನವನ್ನು ನೀಡಿದರು. ನಿರ್ದೇಶಕರಾದ ಶಿವಪ್ರಸಾದ ಇ., ಕಾಲೇಜಿನ ಪ್ರಾಂಶುಪಾಲರಾದ ಜೀವನ್‌ದಾಸ್, ಸಂಯೋಜಿತ ಎಲ್ಲಾ ಸಂಸ್ಥೆಗಳ ಅಧಿಕಾರಿಗಳು ಹಾಗೂ ಗ್ರಾಮದ ಸಕ್ರಿಯ ಕಾರ್ಯಕರ್ತರು ಭಾಗವಹಿಸಿದ್ದರು.

ಜನವರಿ 12 ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಕೇಂದ್ರದ ವೃತ್ತಿ ಮತ್ತು ಕೌಶಲಾಭಿವೃದ್ಧಿಯ ಸಚಿವರಾದ ಶ್ರೀ ಅನಂತಕುಮಾರ ಹೆಗಡೆ ಮತ್ತು ಪಾದಯಾತ್ರೆಯ ಮೂಲಕ ದೇಶ ಸಂಚಾರ ಮಾಡಿದ ಶ್ರೀ ಸೀತಾರಾಮ ಕೆದಿಲಾಯ ಇವರು ಭಾಗವಹಿಸಲಿರುವರು.

Dr.krishna-bhat-speaking

Highslide for Wordpress Plugin