ವಿಚಾರ ಮಂಡನೆ ಕಾರ್ಯಕ್ರಮ

ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ವಿದ್ಯಾರ್ಥಿಗಳಿಂದ ವಿಚಾರ ಮಂಡನೆಯು ನಡೆಯುತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಜೀವನ್‌ದಾಸ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕಾಲೇಜಿನ ಉಪನ್ಯಾಸಕಿ ಉಷಾ ಎ. ಎನ್. ಮಾತನಾಡಿ ಯುವಕರು ಅಂದರೆ ಶಕ್ತಿ. ಅವರು ಹೊಸ ಯುಗದ ನಿರ್ಮಾಪಕರು. ತಮ್ಮ ಧೀ ಶಕ್ತಿಯನ್ನು ಸಕರಾತ್ಮಕವಾಗಿ ಬಳಸಿ ದೇಶಕ್ಕೆ ಭದ್ರತೆಯನ್ನು ಒದಗಿಸಬೇಕು. ಅದನ್ನು ನಾವು ಉಪಯೋಗಿಸುವುದರಲ್ಲಿ ನಮ್ಮತನ ಅಡಗಿದೆ ಎಂದು ನುಡಿದರು.

ಕಲಾ ವಿಭಾಗದ ವಿದ್ಯಾರ್ಥಿಗಳಾದ ಪೂಜಾ, ಚನ್ನಬಸವ, ಧನ್ಯಾ, ಶರಣ್ಯ, ರೂಪ, ಹಾಗೂ ದೀಪ, ಇವರು ವಿಚಾರ ಮಂಡನೆ ಮಾಡಿದರು. ಕಾರ್ಯಕ್ರಮಕ್ಕೆ ಕಲಾ ವಿಭಾಗದ ವಿದ್ಯಾರ್ಥಿನಿ ಧನ್ಯಾ ಪ್ರಭು ಪ್ರಾರ್ಥನೆ ಹಾಡಿದರು. ರಂಜಿತ್ ಸ್ವಾಗತಿಸಿ, ರೇಖಾ ವಂದಿಸಿದರು. ಪೂರ್ಣಿಮ ಕಾರ್ಯಕ್ರಮನ್ನು ನಿರೂಪಿಸಿದರು.

Usha-speaking

Highslide for Wordpress Plugin