ವಿವೇಕಾನಂದ ಪದವಿ ಪೂರ್ವ ಕಾಲೇಜು ಹೆತ್ತವರ ಸಮಾವೇಶ

ಪುತ್ತೂರು: ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿಗೆ ಸೇರ್ಪಡೆಯಾದ ವಿದ್ಯಾರ್ಥಿಗಳ ಮತ್ತು ಅವರ ಹೆತ್ತವರ ಸಮಾವೇಶವು ದಿನಾಂಕ 9.6.2013 ಆದಿತ್ಯವಾರ ಬೆಳಗ್ಗೆ 9.30ರಿಂದ ಕಾಲೇಜಿನ ಕೇಶವ ಸಂಕಲ್ಪ ಸಭಾಭವನದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀನಿವಾಸ್ ಪೈ ಇವರು ವಹಿಸಿದರೆ, ಮುಖ್ಯ ಅತಿಥಿಗಳಾಗಿ ಆಡಳಿತ ಮಂಡಳಿಯ ಸಂಚಾಲಕರಾದ ಕೇಶವ ಮೂರ್ತಿ ಡಿ ಹಾಗೂ ಸಂಯೋಜನಾಧಿಕಾರಿ ವಿ.ಜಿ.ಭಟ್ ಭಾಗವಹಿಸಿದರು.

ಬೆಳಗ್ಗೆ 9.30ರಿಂದ ವಿಜ್ಞಾನ ವಿಭಾಗಕ್ಕೆ ಸೇರ್ಪಡೆಯಾದ ವಿದ್ಯಾರ್ಥಿಗಳ ಹಾಗೂ ಅವರ ಹೆತ್ತವರ ಸಮಾವೇಶ ನಡೆದರೆ, ಮಧ್ಯಾಹ್ನ 12.30ರಿಂದ ವಾಣಿಜ್ಯ ಮತ್ತು ಕಲಾ ವಿಭಾಗ ವಿದ್ಯಾರ್ಥಿಗಳ ಮತ್ತು ಅವರ ಹೆತ್ತವರ ಸಮಾವೇಶ ನಡೆಯಿತು ಎಂದು ಕಾಲೇಜಿನ ಪ್ರಾಂಶುಪಾಲ ಜೀವನ್ದಾಸ್ ಎ ತಿಳಿಸಿದರು.

Highslide for Wordpress Plugin