ವ್ಯಕ್ತಿತ್ವ ವಿಕಸನ ತರಬೇತಿ ಶಿಬಿರ

ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಕಲಾ ಸಂಘದ ವತಿಯಿಂದ ಕಲಾ ವಿಭಾಗದ ವಿದ್ಯಾರ್ಥಿಗಳಿಗೆ ನಮ್ಮೊಳಗಿನ ನಾವು ಎಂಬ ವ್ಯಕ್ತಿತ್ವ ವಿಕಸನ ತರಬೇತಿ ನಡೆಯಿತು. ತರಬೇತುದಾರರಾಗಿ ಇಂಡಸ್ ಕಾಲೇಜಿನ ಪ್ರಾಂಶಪಾಲರಾದ ಶ್ರೀಯುತ ಜೆ.ಸಿ ಸೀತಾರಾಮ ಕೇವಳ ಬಂದಿದ್ದರು. ಮೊದಲು ಸಭಾ ಕಾರ್ಯಕ್ರಮ ನಡೆಯಿತು. ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಜೀವನ್‌ದಾಸ್ ಎ. ರವರು ಪ್ರಾಸ್ತಾವಿಕ ಮಾತುಗಳನ್ನು ಆಡಿದರು. ವಿವೇಕಾನಂದ ಪದವಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಹೆಚ್. ಡಿ. ಶ್ರೀಧರ್‌ರವರು ಶುಭಾಶಯಗಳನ್ನು ಕೋರಿದರು. ವಿದ್ಯಾರ್ಥಿಗಳಿಗೆ ಹಲವಾರು ರೀತಿಯ ಮಾರ್ಗದರ್ಶನವನ್ನು ಶ್ರೀಯುತ ಸೀತಾರಾಮ ಕೇವಳ ಅವರು ನೀಡಿದರು.

Highslide for Wordpress Plugin